ಕೆಲ ಬಡಾವಣೆಗಳಲ್ಲಿ ಮನೆ ಮುಂಭಾಗದ ರಸ್ತೆಯಲ್ಲಿ ಚರಂಡಿ ನಿರ್ಮಾಣಕ್ಕೆ ಜಾಗವಿಲ್ಲ. ಅಂತಹ ಕಡೆ ಪೈಪ್ಲೈನ್ ಅಳವಡಿಸಲಾಗುತ್ತದೆ. ನಗರವಾಸಿಗಳು ಇದಕ್ಕೆ ಸಹಕರಿಸಬೇಕು. ಮನೆಗಳ ಅಕ್ಕಪಕ್ಕ ಮಳೆ ನೀರು ನಿಲ್ಲದಂತೆ ಜನ ಎಚ್ಚರ ವಹಿಸಬೇಕು. ನೀರು ನಿಂತಿರುವ ಸ್ಥಳಗಳಲ್ಲಿ ಸೀಮೆಎಣ್ಣೆ ಅಥವಾ ಬ್ಲೀಚಿಂಗ್ ಪುಡಿ ಹಾಕಬೇಕು. ಇಲ್ಲದಿದ್ದರೆ ಸೊಳ್ಳೆ ಉತ್ಪತ್ತಿಯಾಗಿ ಕಾಯಿಲೆಗಳು ಬರುತ್ತವೆ ಎಂದು ಕಿವಿಮಾತು ಹೇಳಿದರು.