22 ಕೆರೆ ಏತ ನೀರಾವರಿ ಯೋಜನೆಯಲ್ಲಿ ಸಮೀಪದ ಕೊಡಗನೂರು, ಕೊಗ್ಗನೂರು, ಆನಗೋಡು, ಅಣಜಿ ಕೆರೆಗೆ ನೀರು ಬರುತ್ತಿದ್ದರೂ ಮಾಯಕೊಂಡ ಮತ್ತು ಹುಚ್ಚವ್ವನಹಳ್ಳಿ ಕೆರೆ ಒಣಗಿ ಬಣಗುಡುತ್ತಿವೆ. ಹಾಗಾಗಿ, ಅಂತರ್ಜಲ ವೃದ್ಧಿಗೆ ಈ ಕೆರೆಗಳನ್ನೇ ನೆಚ್ಚಿರುವ ಹುಚ್ಚವ್ವನಹಳ್ಳಿ, ಎಚ್.ಬಸವಾಪುರ, ಮಾಯಕೊಂಡ, ಹೆದ್ನೆ, ರಾಂಪುರ ಮತ್ತಿತರ ಗ್ರಾಮಸ್ಥರ ನಿದ್ದೆಗೆಡಿಸಿದೆ.