ಮೂರೂವರೆ ವರ್ಷಗಳ ಹಿಂದೆ ಸಂಬಂಧಿಕರ ಮನೆಯಿಂದ ಗಿಡ ತಂದು ನಾಟಿ ಮಾಡಿರುವ ಅವರ ಮನೆಯ ಹಿತ್ತಲಿನಲ್ಲಿ 10 ಮರಗಳು ಫಲ ಬಿಟ್ಟಿವೆ. ‘ಈ ಮರಗಳಿಗೆ ಹೆಚ್ಚು ಆರೈಕೆ ಬೇಡ. ಬೋರ್ಡೊ ದ್ರಾವಣ ಸಿಂಪರಣೆ ಮಾಡದಿದ್ದರೂ ಕೊಳೆರೋಗ ಬರುವುದಿಲ್ಲ. ಕಳೆದ ವರ್ಷ ಇದೇ ಮರದಲ್ಲಿ ಬೆಳೆದಿದ್ದ 25 ಕೆ.ಜಿ ಅಡಿಕೆಯನ್ನು ಕ್ವಿಂಟಲ್ಗೆ ₹ 14ಸಾವಿರ ದರದಲ್ಲಿ ಸ್ಥಳೀಯವಾಗಿ ಮಾರಾಟ ಮಾಡಿದ್ದೇನೆ’ ಎನ್ನುತ್ತಾರೆ ಗಣಪತಿ ಹೆಗಡೆ.