ಬಂಕಾಪುರ, ಸೂಳೇಕಲ್, ಕಲಕೇರಿ, ಬೆನಕನಾಳ, ಮಲ್ಲಿಗೆವಾಡ, ಜೀರಾಳ ಇತರೆ ಗ್ರಾಮಗಳಲ್ಲಿನ ಜಮೀನು ಹಾಗೂ ರಸ್ತೆಗಳಲ್ಲಿ ಮಳೆ ನೀರು ನಿಂತಿರುವುದು ಕಂಡು ಬಂತು.
ಮಳೆಯಿಂದ ಹರ್ಷಿತಗೊಂಡ ರೈತರು ಮಂಗಳವಾರ ಹೊಲದಲ್ಲಿನ ಬೆಳೆಗಳನ್ನು ಪರಿಶೀಲಿಸಿದರು. ಉತ್ತಮ ಮಳೆ ಸುರಿದ ಕಾರಣ ಪಟ್ಟಣಕ್ಕೆ ಧಾವಿಸಿದ ವಿವಿಧ ಗ್ರಾಮಗಳ ರೈತರು ಬಿತ್ತನೆ ಬೀಜ, ಕ್ರಿಮಿಕೀಟ ನಾಶಕ ಔಷಧಿ ಖರೀದಿಯಲ್ಲಿ ತೊಡಗಿದ್ದರು.