ಮಂಗಳೂರಿನಲ್ಲಿ ಕೋಮುಗಲಭೆಯಾದಾಗ ಸರ್ಕಾರ ಶಾತಿ ಸಭೆ ಕರೆದಿತ್ತು. ಅಂದು ಆ ಸಭೆ ಬಹಿಷ್ಕಾರ ಮಾಡಿದ್ದ ಬಿಜೆಪಿ, ಈಗ ಪ್ರಚೋದನೆ ಮೂಲಕ ಶಾಂತಿ ಕದಡಲು ಹೀಗೆ ಮಾಡುತ್ತಿದೆ. ಸರ್ಕಾರ ಪೊಲೀಸರನ್ನು ಬಳಸಿಕೊಂಡು ರ್್ಯಾಲಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿಲ್ಲ. ಕಾನೂನಿಗೆ ಭಂಗ ತರಲಿದೆ ಎಂಬ ಕಾರಣದಿಂದಲೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಸಚಿವರು ಸಮರ್ಥಿಸಿಕೊಂಡರು.