ಚಿಕ್ಕಮಗಳೂರು: ತಾಲ್ಲೂಕಿನ ಹಿರೇ ಕೊಳಲೆ ಕೆರೆ ಕೋಡಿ ಬಿದ್ದಿದ್ದು, ನಗರಸಭೆ ವತಿಯಿಂದ ಮಂಗಳವಾರ ಕೆರೆಗೆ ಬಾಗಿನ ಅರ್ಪಿಸಲಾಯಿತು. ಬಾಗಿನ ಅರ್ಪಣೆ ಪೂಜಾ ಕೈಂಕರ್ಯದಲ್ಲಿ ಶಾಸಕ ಸಿ.ಟಿ.ರವಿ, ಪತ್ನಿ ಪಲ್ಲವಿ ಸಿ.ಟಿ.ರವಿ, ನಗರಸಭೆ ಆಯಕ್ತೆ ಎಂ.ವಿ.ತುಷಾರಮಣಿ, ಅಧ್ಯಕ್ಷೆ ಕವಿತಾ ಶೇಖರ್, ಉಪಾಧ್ಯಕ್ಷ ರವೀಂದ್ರ ಪ್ರಭು, ಸದಸ್ಯರಾದ ಶಾಮಲಾ ರಾವ್, ಪುಷ್ಪರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜಿ.ಸೋಮಶೇಖರಪ್ಪ ಪಾಲ್ಗೊಂಡಿದ್ದರು.