ಕುಂದಾಪುರ: ತಾಲ್ಲೂಕಿನ ಅಂಪಾರು ಗ್ರಾಮದ ಕೊಲ್ಲೂರು ರಸ್ತೆಯಲ್ಲಿ ಮಂಗಳವಾರ ನಸುಕಿನ ವೇಳೆ ದುಷ್ಕರ್ಮಿಗಳು 2 ಕಾಡುಕೋಣಗಳನ್ನು ಗುಂಡುಹೊಡೆದು ಬೇಟೆಯಾಡಿದ್ದಾರೆ.
ಕಾಡುಕೋಣಗಳ ಶವ ರಸ್ತೆ ಪಕ್ಕದ ಪೊಡೆಯಲ್ಲಿ ಕಂಡು ಬಂದಿದ್ದು , ಅವುಗಳನ್ನು ಸಾಗಿಸಲು ಬೇಟೆಗಾರರಿಗೆ ಸಾಧ್ಯವಾಗಿಲ್ಲಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಅವರ ತಂಡದವರು ಪ್ರಕರಣವನ್ನು ಪರಿಶೀಲಿಸಿ ಕಾಡುಕೋಣವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣದಲ್ಲಿ1 ಕಾರು,1ಗೂಡ್ಸ್,1 ಬೈಕ್ ಹಾಗೂ 8 ಜನರು ಭಾಗಿಯಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.