ಕಾಮಾಗಾರಿಯಲ್ಲಿ ನಿತ್ಯ ಬೆರಳೆಣಿಕೆಯಷ್ಟು ಮಂದಿ ಕೆಲಸಮಾಡಿದರೆ ಕಾಮಗಾರಿ ಮುಗಿಯುವುದು ತಡವಾಗುತ್ತದೆ. ವಸತಿ ಶಾಲೆ ಗುಡ್ಡಗಾಡು ಪ್ರದೇಶದಲ್ಲಿದ್ದು, ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆದಷ್ಟು ಬೇಗನೆ ಕಾಂಪೌಂಡ್ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಚಂದ್ರಶೇಖರಪ್ಪ ಗೌಡ, ಎಂ.ದಾನೇಶ್, ಶಿವರಾಜ್, ನಾಗರಾಜ್, ಶಿವಮೂರ್ತಿ, ಬಾಲಕೃಷ್ಣ ಇದ್ದರು.