ದಲಿತ ಮುಖಂಡ ಜಿ.ವಿ. ಗಂಗಪ್ಪ ಮಾತನಾಡಿ, ಗೌರಿ ಮತ್ತು ಕಲಬುರ್ಗಿ ಅವರ ಕೊಲೆಗಳನ್ನು ಸೈದ್ಧಾಂತಿಕ ವಿರೋಧಿಗಳೇ ನಡೆಸಿರಲು ಸಾಧ್ಯ ಎಂಬ ಗುಮಾನಿ ಗಟ್ಟಿ ಆಗುತ್ತಿದೆ. ಪ್ರಗತಿಪರರ ನಡುವೆ, ನೀಲಿ ಕೆಂಪು ಹಸಿರು ಬೆಸುಗೆಯಾಗಿ ಮನುಷ್ಯ ವಿರೋಧಿಗಳ ವಿರುದ್ಧ ಸಿದ್ಧಾಂತವನ್ನು ಮಣಿಸಬೇಕಾಗಿದೆ. ಹೋರಾಟಗಾರರು, ಚಿಂತಕರು ಒಗ್ಗೂಡಿ ಹೋರಾಡಬೇಕಿದೆ ಎಂದು ಹೇಳಿದರು.