ಆಗ ಮಧ್ಯಪ್ರವೇಶಿಸಿದ ಆಯುಕ್ತ ಪಿ.ಸುನೀಲಕುಮಾರ್, ‘ಬುಧವಾರ ಒಬ್ಬ ಸದಸ್ಯರ ಮೇಲೆ ಮೊಕದ್ದಮೆ ದಾಖಲಿಸಿದ್ದಕ್ಕೆ ಹೀಗೆ ಸಭೆಯನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ನೀವು ಯಾರನ್ನು ಹೆದರಿಸುತ್ತಿದ್ದೀರಿ? ನಾವು ಹೆದರಿ ಕೆಲಸ ಮಾಡಬೇಕಾ? ನಮ್ಮ ಮಹಿಳಾ ಅಧಿಕಾರಿಗೆ ನಿಂದಿಸಿ, ಬೆದರಿಕೆ ಹಾಕಿದರೂ ನಾವು ಸುಮ್ಮನಿರಬೇಕಾ? ನಿಮಗೆ ಕೈಮುಗಿದು ಕೇಳ್ತೀನಿ, ಪ್ರಕರಣದ ವಿವರ ನೀಡಲು ಆ ಅಧಿಕಾರಿಗೆ ಅವಕಾಶ ನೀಡಿ’ ಎಂದರು.