ಪ್ಲಾಟ್ ಫಾರಂನ ಕಂಬಗಳ ಸುತ್ತ ಪ್ರಯಾಣಿಕರು ಕುಳಿತು ಕೊಳ್ಳಲು ಅನುಕೂಲವಾಗುವಂತೆ ಕಟ್ಟೆ ನಿರ್ಮಿಸಲಾಗಿದೆ. ಕಂಬಗಳ ಬಳಿಯೇ ಛಾವಣಿ ನೀರು ಸುರಿದಿದ್ದರಿಂದ ಜನರು ಎದ್ದು ನಿಲ್ಲುವಂತಾಗಿತ್ತು. ಅಲ್ಲದೆ ರಾತ್ರಿ 9.30ರ ವೇಳೆ ಬೆಂಗಳೂರು ಮತ್ತಿತರ ಕಡೆಗೆ ಹೋಗುವ ಹಲವು ರೈಲುಗಳು ಬರುವುದರಿಂದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿತ್ತು. ಇದರಿಂದ ಜನರು ನಿಲ್ಲಲೂ ಸ್ಥಳಾವಕಾಶವಿಲ್ಲದೆ ಪರದಾಡಿದರು.