‘ಕಾರ್ಖಾನೆ ಆರಂಭಿಸಲು ದುಡಿಯುವ ಬಂಡವಾಳ ಅಗತ್ಯವಿದ್ದು, ಅದಕ್ಕಾಗಿ ₹ 5 ಕೋಟಿವರೆಗೂ ಹಣ ಕೊಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದರು. ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮತ್ತು ಪಿಎಸ್ಎಸ್ಕೆ ಅಧ್ಯಕ್ಷ ಹಾರೋಹಳ್ಳಿ ನಂಜುಂಡೇಗೌಡ ಅವರ ಸಮ್ಮುಖದಲ್ಲಿ ಅಭಯ ನೀಡಿದ್ದಾರೆ. ಕಬ್ಬು ಸಾಗಣೆಗೆ ನೀಡುವ ರಿಯಾಯಿತಿ ಹಣ ₹ 2 ಕೋಟಿ ಕೊಡಲೂ ಅವರು ಒಪ್ಪಿಕೊಂಡಿದ್ದಾರೆ.