ಬಿಜೆಪಿ ಬ್ರಾಹ್ಮಣರ ಪಕ್ಷ, ಮೇಲ್ವರ್ಗದವರ ಪಕ್ಷ, ಉತ್ತರ ಭಾರತದ ಪಕ್ಷ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡಿತು. ಆದರೆ, ಜನರು ಅದಕ್ಕೆ ಮನ್ನಣೆ ನೀಡಲಿಲ್ಲ. ಆರ್ಎಸ್ಎಸ್ ಅನ್ನು ಮುಗಿಸುವುದಾಗಿ ರಾಹುಲ್ ಗಾಂಧಿ ಅವರ ತಂದೆ, ಅಜ್ಜಿ ಹೇಳಿದ್ದರು. ಆದರೆ, ಅವರಿಂದ ಆಗಲಿಲ್ಲ. ಇನ್ನು ರಾಹುಲ್ ಅವರಿಂದ ಸಾಧ್ಯವೇ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ರಾಜ್ಯದಲ್ಲಿ ಇರುವುದು ಕೊಲೆಗಡುಕರ ಸರ್ಕಾರ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.