ರಸ್ತೆಯುದ್ದಕ್ಕೂ ಇರುವ ರೈತರ ಕೃಷಿ ಭೂಮಿಯಲ್ಲಿ ನೀರು ನಿಲ್ಲುವಂತಾಗಿದೆ ಎಂದು ರಾಜ್ಯ ರೈತ ಸಂಘದ ಮುಖಂಡ ಸತೀಶ್ ದೂರಿದ್ದಾರೆ. ಹೆದ್ದಾರಿಯುದ್ದಕ್ಕೂ ಇರುವ ಕೃಷಿ ಭೂಮಿಯಿಂದ ನೀರು ಹೊರ ಹೋಗಲು ರಸ್ತೆ ಬದಿಯಲ್ಲಿ ಯಾವುದೇ ಚರಂಡಿ ನಿರ್ಮಿಸಿಲ್ಲ. ಇದರಿಂದ ಮಳೆ ಬಂದಾಗ ನೀರು ಹೊರ ಹೋಗಲು ಸಾಧ್ಯವಾಗದೆ ರೈತರ ಹೊಲಗಳಲ್ಲಿ ಕೆರೆಯಂತೆ ನೀರು ನಿಲ್ಲುವಂತಾಗಿದೆ ಎಂದು ಮಾಹಿತಿ ನೀಡಿದ್ದಾರೆ.