ಗುಡುಗು, ಮಿಂಚಿನ ಆರ್ಭಟಕ್ಕೆ ನಿಪ್ಪಾಣಿ ಗ್ರಾಮದಲ್ಲಿ ಮೂವರಿಗೆ ಸಿಡಿಲಿನ ಶಾಕ್ ತಗುಲಿ ತಲೆಸುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಕೆಲಕಡೆ ಗಾಳಿ ಮಿಶ್ರಿತ ಮಳೆಯಿಂದಾಗಿ ರಾಜಾಪುರ ಗ್ರಾಮದಲ್ಲಿ 4, ಅರಜಂಬಗಾ ಗ್ರಾಮದಲ್ಲಿ 14, ಕೊಡದೂರ ಗ್ರಾಮದಲ್ಲಿ 2, ಸುಗೂರ ಗ್ರಾಮದಲ್ಲಿ 1, ಇವಣಿ ಗ್ರಾಮದಲ್ಲಿ 13 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಇನ್ನು ಕೆಲವೆಡೆ ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜುಕುಮಾರ ಆಲಹಳ್ಳಿಕರ್ ಹೇಳಿದರು.