ಕಲಬುರ್ಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್ಇಕೆಆರ್ಟಿಸಿ) ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಲಿಯಾಸ್ ಸೇಠ್ ಬಾಗವಾನ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು, ಶುಕ್ರವಾರ ಇಲ್ಲಿಯ ನಾಲ್ಕು ಜನ ಉದ್ಯಮಿಗಳ ಮನೆ ಹಾಗೂ ಕಚೇರಿಗಳ ಮೇಲೂ ದಾಳಿ ಮಾಡಿದರು.
‘ಗಣೇಶ ಮಂದಿರ ಬಡಾವಣೆಯಲ್ಲಿರುವ ಉದ್ಯಮಿ ಖಲೀಲ್ ಸೇಠ್ ಅವರ ನಿವಾಸ ಹಾಗೂ ಕಚೇರಿ, ಇಲಿಯಾಸ್ ಬಾಗವಾನ ಅವರ ಸಹೋದರ ಅಯೂಬ್ ಬಾಗವಾನ ಅವರ ನಿವಾಸ, ಇನ್ನೊಬ್ಬ ಉದ್ಯಮಿ ಮುಜೀಬ್ ಹಾಗೂ ಶಹಾ ಮತ್ತು ಕೊಠಾರಿ ಕುಟುಂಬಗಳಿಗೆ ಸೇರಿದ ಮನೆ ಮೇಲೆ ದಾಳಿ ಮಾಡಿದ 28 ಅಧಿಕಾರಗಳನ್ನು ಒಳಗೊಂಡ ಅಧಿಕಾರಿಗಳ ತಂಡವು ಪರಿಶೀಲನೆ ನಡೆಸಿತು’ ಎಂದು ಮೂಲಗಳು ತಿಳಿಸಿವೆ.