ಪಟ್ಟಣದ ಕೆಲವೆಡೆಗಳಲ್ಲಿ ಕುಡಿಯುವ ನೀರಿಲ್ಲದೆ ಜನತೆ ಪರದಾಡ ಬೇಕಿದೆ. ದುರಂತವೆಂದರೆ ಪುರಸಭೆಯ ಸದಸ್ಯರಾಗಲಿ, ಅಧಿಕಾರಿಗಳಾಗಲಿ ವ್ಯರ್ಥವಾಗುತ್ತಿರುವ ನೀರು ನಿಲ್ಲಿಸುವತ್ತ ಗಮನಿಸುತ್ತಿಲ್ಲ. ಮಂಚನಬೆಲೆ ಜಲಾಶಯದಿಂದ ದುಬಾರಿ ಹಣ ಖರ್ಚು ಮಾಡಿ ಮಾಗಡಿಗೆ ತರುತ್ತಿರುವ ನೀರು ಪೋಲಾಗದಂತೆ ಕ್ರಮ ಕೈಗೊಳ್ಳುವಂತೆ ಜಯರಾಮಯ್ಯ ಮನವಿ ಮಾಡಿದ್ದಾರೆ.