ಹೌದು. ಠಾಣೆ ಆರಂಭಗೊಂಡ ಜಾಗ ಸಮತಟ್ಟಾಗಿರಲಿಲ್ಲ. ಜನವಸತಿಯೂ ಇರಲಿಲ್ಲ. ನೀರಿನ ಸಮಸ್ಯೆಯೂ ತೀವ್ರವಾಗಿತ್ತು. ಆದರೆ, ಇದೀಗ ಅಲ್ಲಿ ಗಜಗೌರಿ, ಗುಲಾಬಿ, ದಾಸವಾಳ ಅರಳಿವೆ. ಅಂಜೂರ, ತೆಂಗು, ನಿಂಬೆ, ಮಾವು, ಗಾಳಿ ಮರ ಸೇರಿದಂತೆ ಮತ್ತಿತರ ಗಿಡಗಳು ಬೆಳೆದು ನಿಂತಿವೆ. ವರ್ಷಗಳ ಹಿಂದೆ ನೆಟ್ಟ ಚಿಕ್ಕು(ಸಪೋಟಾ), ಸೀತಾಫಲ ಹಾಗೂ ಪೇರಲ ಗಿಡಗಳು ಫಲ ಕೊಡುತ್ತಿವೆ.