ಬೈಲಹೊಂಗಲದ ಗುತ್ತಿಗೆದಾರ ರೊಬ್ಬರು ಪಶು, ಪಕ್ಷಿಗಳು ಮೃತಪಟ್ಟರೆ ಅವುಗಳ ಶವ ಸಂಸ್ಕಾರಕ್ಕೆ ಉಚಿತವಾಗಿ ಜೆಸಿಬಿ ನೀಡಿ ನೆರವಾಗುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ. ಬೈಲಹೊಂಗಲದ ಶಿಕ್ಷಕರ ಚಾಳ ನಿವಾಸಿ, ಕ್ಲಾಸ್ 1 ಗುತ್ತಿಗೆದಾರ ಮಂಜುನಾಥ ಹಿರೇಮಠ ಅವರು ಕಳೆದ 11 ವರ್ಷಗಳಿಂದ ಈ ಕಾರ್ಯ ಮಾಡುತ್ತಿದ್ದಾರೆ.