ಗಂಗಾವತಿ: ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿರುವ ಬೋಳಾಡಿ ಬಸವೇಶ್ವರರ ಬೃಹನ್ಮಠದ ಆವರಣಕ್ಕೆ ಮಳೆ ನೀರು ನುಗ್ಗಿದ್ದು, ಮಠಕ್ಕೆ ಬರುವ ಭಕ್ತರು ಪರದಾಡುವಂತಾಗಿದೆ. ಸುತ್ತಲಿನ ಹೊಲ, ಗದ್ದೆಗಳಿಂದ ನೀರು ಹರಿದು ಬರುತ್ತಿದೆ. ಗ್ರಾಮದ ಚರಂಡಿಗಳ ನೀರು ಸಹ ಮಠದ ಆವರಣಕ್ಕೆ ನುಗ್ಗುತ್ತಿದೆ. ಇದರಿಂದ ಮಠದ ಆವರಣದೊಳಕ್ಕೆ ಭಕ್ತರು ಹೋಗಲು ಆಗುತ್ತಿಲ್ಲ.