ಮುಳಬಾಗಿಲು: ತಾಲ್ಲೂಕಿನ ಎಲ್ಲೆಡೆ ಇತ್ತೀಚೆಗೆ ಸುರಿದ ಮಳೆಗೆ ಚಿಗುರು ಮೇವು ಮೂಡಿದೆ. ರೈತರು ಮತ್ತು ಕುರಿಗಾಹಿಗಳು ಸಂತಸಗೊಂಡಿದ್ದಾರೆ. ಬಯಲು, ಹೊಲ ಗದ್ದೆಗಳ ಬಳಿ ಹಸಿರು ಮೇವು ಬೆಳೆದಿದೆ. ಬೀಡು ಪ್ರದೇಶ, ಅರಣ್ಯ ಪ್ರದೇಶ ಸೇರಿದಂತೆ ಹೊಲ ಗದ್ದೆಗಳಲ್ಲಿಯೂ ಮೇವು ಚಿಗುರಿದೆ.ಈ ಹಿಂದೆ ಜಾನುವಾರುಗಳಿಗೆ ಅರಳಿ ಮರದ ಸೊಪ್ಪನ್ನು ಕಟಾವು ಮಾಡಿ ನೀಡಲಾಗುತ್ತಿತ್ತು.