ಹೊಸದುರ್ಗ: ತಾಲ್ಲೂಕಿನ ವಿವಿಧೆಡೆ ಕಳೆದೆರಡು ದಿನಗಳಿಂದ ಹದ ಮಳೆ ಬರುತ್ತಿದ್ದು ಬೆಳೆಗಳಿಗೆ ಜೀವಕಳೆ ಬಂದಿದೆ. ಬುಧವಾರ ಹಾಗೂ ಗುರುವಾರ ಸಂಜೆ ಮಧುರೆ, ಗುತ್ತಿಕಟ್ಟೆ, ದೇವಿಗೆರೆ, ಹೊನ್ನೇಕೆರೆ, ನಾಗೇನಹಳ್ಳಿ, ಬಾಗೂರು, ಮಲ್ಲಪ್ಪನಹಳ್ಳಿ, ಆನಿವಾಳ, ಕುಂದೂರು, ನೀರಗುಂದ, ಮಾರಬಗಟ್ಟ, ಮಳಲಿ, ಎಂ.ಜಿ.ದಿಬ್ಬ, ಬೆಲಗೂರು, ತಂಡಗ, ಗರಗ, ಕಬ್ಬಳ, ಕಲ್ಕೆರೆ ಮತ್ತೋಡು, ಹಾಗಲಕೆರೆ, ಕಾರೇಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹದ ಮಳೆಯಾಗಿದೆ. ಒಣಗುವ ಸ್ಥತಿಯಲ್ಲಿದ್ದ ರಾಗಿ, ಸಾವೆಗೆ ಇದರಿಂದ ಜೀವಕಳೆ ಬಂದಿದೆ.