ಮೈಸೂರು: ಇಲ್ಲಿನ ಕಟ್ಟೆಮಳಲವಾಡಿಯ ನೂತನ ನ್ಯಾಯಾಲಯ ಕಟ್ಟಡದ ಹಿಂಭಾಗದ ದೇವರ ಕೊಳದಲ್ಲಿ ಈಜಲು ಹೋಗಿದ್ದ ಮೋಹನ್ (13) ಎಂಬಾತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಕೆ.ಜಿ.ಕೊಪ್ಪಲಿನ ಸಿದ್ದಪ್ಪಾಚಾರಿ ಎಂಬುವರ ಪುತ್ರ ಮೋಹನ್, ಸರಸ್ವತಿಪುರಂನ ಜೆಎಸ್ಎಸ್ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿ. ಕಸ–ಕಡ್ಡಿಗಳಿಂದ ತುಂಬಿದ್ದ ಈ ಕೊಳವನ್ನು ಗಣೇಶಮೂರ್ತಿ ವಿಸರ್ಜನೆಗೆ ಈಚೆಗೆ ಶುಚಿಗೊಳಿಸಲಾಗಿತ್ತು.