ಈಗಾಗಲೇ ರಾಗಿ ಬಿತ್ತನೆ ಮುಗಿದಿದೆ. ಹೊಲಗಲ್ಲಿ ಗುಂಟ್ವೆ ಕಾರ್ಯ ಆರಂಭವಾಗಿದೆ. ಶನಿವಾರ ರಾತ್ರಿ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಮಳೆ ಸುರಿದಿದೆ. ಕೆರೆ–ಕುಂಟೆಗಳಿಗೆ ನೀರು ಹರಿದು ಬಂದಿದೆ. ಲಕ್ಕೂರು ಹೋಬಳಿ ವ್ಯಾಪ್ತಿಯ ಮಾದನಹಟ್ಟಿ, ಉಪಾಸಪುರ ಗ್ರಾಮಗಳಲ್ಲಿ ಹಳೇ ಕಟ್ಟಡಗಳು ಕುಸಿದಿವೆ. ಬ್ಯಾಲಹಳ್ಳಿ ಗ್ರಾಮದ ತಿಮ್ಮರಾಯಪ್ಪ , ಮುನಿಯಮ್ಮ ,ಚಂದ್ರಪ್ಪ ಹಾಗು ಬರಗೂರು ಗ್ರಾಮದ ಮುನಿರಾಜು, ನೀಲಮ್ಮ, ಮುನಿಯಪ್ಪ, ನಾರಾಯಣಪ್ಪ, ಗಂಗಪ್ಪ ಅವರ ಮನೆಗಳಿಗೆ ಮಳೆ ನೀರು ನುಗ್ಗಿದೆ. ದವಸ–ಧಾನ್ಯಗಳು ನೀರುಪಾಲಾಗಿದೆ. ಗ್ರಾಮದ ಯಲ್ಲಮ್ಮ ದೇವಾಲಯ ನೀರಿನಿಂದ ಆವೃತವಾಗಿದೆ.