ನೇರ ನಡೆ ನುಡಿಯವರು, ಸತ್ಯ ಹೇಳುವವರು ವೈಚಾರಿಕ ಮನೋಭಾವ ಉಳ್ಳವರು ನೆಮ್ಮದಿಯಾಗಿ ಈ ರಾಷ್ಟ್ರದಲ್ಲಿ ಬದುಕುವಂತಿಲ್ಲವಾಗಿದೆ. ತಂದೆಯಿಂದ ವೈಚಾರಿಕತೆಯನ್ನು ಮೈಗೂಡಿಸಿಕೊಂಡು, ನಾಡಿನ ಉದ್ದಗಲ ತಮ್ಮ ಪತ್ರಿಕೆ ಮೂಲಕ ಪ್ರಗತಿಪರ ಚಿಂತನೆಯನ್ನು ಬಿತ್ತುತ್ತಿದ್ದ ದಿಟ್ಟ ಮಹಿಳೆ ಗೌರಿ ಲಂಕೇಶ ಹತ್ಯೆ ಖಂಡನೀಯ. ಅದರಲ್ಲೂ ಕನ್ನಡನಾಡು ಶಾಂತಿ–ಸೌಹಾರ್ದತೆಗೆ, ಅಹಿಂಸೆಗೆ ಹೆಸರುವಾಸಿ. ಇಂತಹ ನಾಡಿನಲ್ಲಿ ಸತ್ಯದ ಕೊಲೆ ನಡೆಯುತ್ತಿದೆ.