ದೇಶದಲ್ಲಿ ಒಂದು ಹತ್ಯೆಯಾಗಲಿ, ಒಂದು ಚಳವಳಿಯಾಗಲಿ, ಪ್ರಕೃತಿ ವಿಕೋಪವಾಗಲಿ, ವೈದ್ಯರ ನಿರ್ಲಕ್ಷ್ಯವಾಗಲಿ, ರಾಜಕೀಯ ಬದಲಾವಣೆಯಾಗಲಿ... ಎಲ್ಲಕ್ಕೂ ಅವರು ದೂಷಿಸುವುದು ಆರ್ಎಸ್ಎಸ್ ಅಥವಾ ಬಿಜೆಪಿಯನ್ನು (ಅನಿಷ್ಟಕ್ಕೆಲ್ಲಾ ಶನಿದೇವ ಎನ್ನುವಂತೆ). ರಾಹುಲ್ಗೆ ಚರಿತ್ರೆಯ ಹೆಚ್ಚಿನ ಜ್ಞಾನ ಇಲ್ಲದಿರಬಹುದು ಅಥವಾ ಅವರಿಗೆ ಉಪದೇಶಿಸುವವರಲ್ಲೂ ಅಧ್ಯಯನದ ಕೊರತೆ ಇರಬಹುದು. ಒಟ್ಟಿನಲ್ಲಿ ರಾಹುಲ್ ಗಾಂಧಿ ತಮ್ಮ ಹೇಳಿಕೆಗಳ ಮೂಲಕ ಆರ್ಎಸ್ಎಸ್ ಮತ್ತು ಬಿಜೆಪಿಗೆ ಪರೋಕ್ಷವಾಗಿ ಲಾಭ ಮಾಡುತ್ತಿರುವಂತೆ ಭಾಸವಾಗುತ್ತದೆ.