ಅಗತ್ಯ ಪ್ರಮಾಣದ ಮಳೆ ಬಾರದೆ ಬಟಾಣಿ ಆವಕ ಕಡಿಮೆಯಾಗಿದೆ. ಕೆ.ಜಿ.ಗೆ ₹ 50 ರಂತೆ ಮಾರಾಟ ಮಾಡಲಾಗುತ್ತಿದೆ. ಮಳೆ ಕೊರತೆಯಿಂದ ತರಕಾರಿಗಳ ಬೆಲೆಯಲ್ಲೂ ಅಲ್ಪ ಮಟ್ಟಿನ ಏರಿಕೆ ಆಗಿದೆ. ಹಸಿರು ಮೆಣಸಿನಕಾಯಿ ಕೆ.ಜಿ ಗೆ ₹ 30, ಹೀರೆಕಾಯಿ ₹ 35, ಈರುಳ್ಳಿ ₹ 25, ಅವರೆಕಾಯಿ ₹ 30, ಶುಂಠಿ ₹ 45 ರಿಂದ ₹ 50, ಕ್ಯಾರೇಟ್ ₹ 63 ಹಾಗೂ ಟೊಮೆಟೊ ₹ 35ಕ್ಕೆ ಲಭ್ಯ ಇದೆ. ಪಾಲಾಕ್, ಕೊತ್ತಂಬರಿ, ಮೆಂತ್ಯ, ದಂಟು ಸೊಪ್ಪುಗಳನ್ನು ಕಟ್ಟಿಗೆ ₹5 ರಿಂದ ₹10 ವರೆಗೆ ಮಾರಲಾಗುತ್ತಿದೆ.