‘ನಮಗೆ ಸುಮಾರು ₹5 ಲಕ್ಷಕ್ಕೂ ಹೆಚ್ಚು ಹಣ ನಷ್ಟವಾಗಿದೆ. ಕೂಡಲೇ ವರನನ್ನು ಪತ್ತೆ ಹಚ್ಚಿ ನ್ಯಾಯ ಕಲ್ಪಿಸಬೇಕು’ ಎಂದರು.ವಧುವಿನ ಪೋಷಕರಾದ ತಾಜುದ್ದಿನ್, ಸೈಯದ್ ಖಾಜಾ, ಮೌನುದ್ದಿನ್, ಸಲೀಂ, ರೇಷ್ಮಾ, ಸಯಿದಾ, ಆಸ್ಮಾಭಾನು, ರೆಹಾನಾ ಇದ್ದರು. ವರನ ಸಹೋದರ ಸೈಯದ್ ಶಾಬುದ್ಧೀನ್ ಮಾತನಾಡಿ, ‘ಮದುವೆಗೆ ನಾವೂ ಸಿದ್ಧತೆ ಮಾಡಿಕೊಂಡಿದ್ದೆವು. ನನ್ನ ತಮ್ಮನ ಒಪ್ಪಿಗೆಯಿಂದಲೇ ಮದುವೆ ನಿಶ್ಚಯ ಮಾಡಿದ್ದೆವು’ ಎಂದರು.