ಪಟ್ಟಣದ ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿ, ಮೈಸೂರಿನ ಬ್ರಾಹ್ಮಣ ಸಂಘ, ಅಭಿನವ ಭಾರತ್ ಮತ್ತು ಸಿಂಹಭೂಮಿ ಸಂಘಟನೆಗಳ ಜತೆಗೆ ಆಂಧ್ರಪ್ರದೇಶದ ನಂದಮೂರಿ ಬಸವ ತಾರಕ ರಾಮರಾವ್ ಸೇವಾ ಟ್ರಸ್ಟ್ ಈ ಮೇಳ ಆಯೋಜಿಸಿದ್ದು, ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶದ, ತೆಲಂಗಾಣ, ಕೇರಳ ರಾಜ್ಯಗಳಿಂದ ಬಂದಿದ್ದ ಭಕ್ತರು ಕಾವೇರಿ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು.