‘ಈ ಭಾಗಕ್ಕೆ ಪ್ರತಿನಿತ್ಯ ಸುತ್ತನುತ್ತಲಿನ ಗ್ರಾಮಗಳ ಕುರಿಗಾಹಿಗಳು, ಜಾನುವಾರುಗಳು ಓಡಾಡುತ್ತಾರೆ. ಇಲ್ಲಿ ಬಂದ ತಕ್ಷಣ ಮೈಯಲ್ಲಾ ಕಣ್ಣಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಇದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಬೇಕು’ ಎಂದು ಗ್ರಾಮಸ್ಥ ಚಿಕ್ಕನರಸಿಂಹಯ್ಯ ಹೇಳುವರು.