ಆನೆಯ ಮೇಲೆ ಗಂಗಾಧರೇಶ್ವರಸ್ವಾಮಿ ಮೂರ್ತಿಯ ಮೆರವಣಿಗೆ ಮತ್ತು ಗ್ರಾಮದ ಹದಿನಾಲ್ಕು ದೇವರುಗಳ ಮೆರೆವಣಿಗೆಯನ್ನು ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಎಂ.ರಾಜಣ್ಣ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ರಹಮತ್ ಜಾನ್, ಉಪಾಧ್ಯಕ್ಷ ನಾರಾಯಣಸ್ವಾಮಿ, ಮೇಲೂರು ರವಿಕುಮಾರ್, ಬಿಜೆಪಿ ಮುಖಂಡ ಸುರೇಶ್, ವಿಜಯಪುರ ಮಠದ ಮಹಾದೇವ ಸ್ವಾಮೀಜಿ ಭಾಗವಹಿಸಿದ್ದರು.