ಕಾನೂನುಗಳು ಇರುವುದೇ ಒಂದು, ಆಗುತ್ತಿರುವುದೇ ಒಂದು. ಜನಸಾಮಾನ್ಯರಿಗೆ ಮಾತ್ರ ಕಾನೂನು ಅನ್ವಯವಾಗುವುದು. ರಾಜಕಾರಣಿಗಳಿಗೆ, ಶ್ರೀಮಂತರಿಗೆ, ಪ್ರಭಾವಿ ವ್ಯಕ್ತಿಗಳಿಗೆ ಸಂವಿಧಾನದತ್ತ ಕಾನೂನು–ಕಟ್ಟಳೆಗಳು ಮೂಲೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿವೆ. ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಜನಸಾಮಾನ್ಯ, ಬಡಬೋರೇಗೌಡ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ನ್ಯಾಯ ಎಂಬುದು ಮರೀಚಿಕೆ ಆಗಿದೆ.