ಪ್ರತಿ ವರ್ಷದಂತೆ ಈ ವರ್ಷವೂ ಮನೆಯಲ್ಲಿ ಪೂಜೆ ನಡೆಸಿದ ಅವರು, ಮನೆಯವರ ವಿರೋಧವನ್ನೂ ಲೆಕ್ಕಿಸದೇ ಹೊಲದಲ್ಲಿ ಮೂರ್ನಾಲ್ಕು ಅಡಿ ಗುಂಡಿ ತೆಗೆದು ಗಣೇಶ ಮೂರ್ತಿಯನ್ನು ಹೂತಿದ್ದು ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟಿ.ವಿ ಮಾಧ್ಯಮಗಳಲ್ಲಿ ಈ ಘಟನೆ ಪ್ರಸಾರವಾದ ಬಳಿಕ ಮೂರ್ತಿಯನ್ನು ಹೊರ ತೆಗೆದು ನೀರಿನಲ್ಲಿ ವಿಸರ್ಜಿಸಿದರು ಎಂದು ತಿಳಿದುಬಂದಿದೆ.