ಕೊಣನೂರು: ರಾಮನಾಥಪುರದ ರಾಮೇಶ್ವರ ದೇವಾಲಯ ಬಳಿಯ ಕಾವೇರಿ ನದಿಯ ಪುಷ್ಕರಣಿಯಲ್ಲಿ ನಡೆಯುತ್ತಿರುವ ಪುಷ್ಕರ ಸ್ನಾನಾಚರಣೆಯ ಮೊದಲ ದಿನ ಮಂಗಳವಾರ ಸಂಜೆ ಗಂಗಾರತಿ ಕಾರ್ಯಕ್ರಮ ನಡೆಯಿತು. ಪುಷ್ಕರಣಿಯ ಬಳಿ ಮೆಟ್ಟಿಲುಗಳ ಮೇಲೆ ಕಾವೇರಿ ಮಾತೆಗೆ 12 ವಿಧದ ಆರತಿಗಳಾದ ಓಂ ಆರತಿ, ಹಂಸಾರತಿ, ಗರುಡಾರತಿ, ಬ್ರಹ್ಮಾರತಿ, ಸಿಂಹಾರತಿ, ಸೂರ್ಯಾರತಿ, ಕುಂಭಾರತಿ, ನವಗ್ರಹಾರತಿ, ಪಂಚಾರತಿ, ನಾಗಾರತಿ, ಚಂದ್ರಾರತಿ, ನಂದಿ ಆರತಿಗಳನ್ನು ನೆರವೇರಿಸಿ ಕೊನೆಯದಾಗಿ ನಕ್ಷತ್ರಾರತಿ ಮಾಡಿದ್ದು ಜನರನ್ನು ಭಕ್ತಿಪರವಶವನ್ನಾಗಿಸಿತು.