ಗ್ರಾಮದ ಕೆರೆ ಕುಂಟೆಗಳು ಬೆಟ್ಟದ ತಗ್ಗಿನಲ್ಲಿ ಇರುವುದರಿಂದ ಬೆಟ್ಟದ ಮೇಲಿಂದ ಮಳೆ ನೀರು ಕೆಳಗೆ ಹರಿದು ಬರುತ್ತಿದೆ. ತಾಲ್ಲೂಕಿನಲ್ಲಿ ಕಳೆದೊಂದು ದಶಕದಿಂದ ಬರ ಪರಿಸ್ಥಿತಿ ಇದ್ದ ಕಾರಣ ಕೆರೆ, ಬಾವಿ, ಹಳ್ಳ, ಕುಂಟೆಗಳಲ್ಲಿ ಜೀವಜಲ ಬತ್ತಿತ್ತು. ಇತ್ತೀಚೆಗೆ ಉತ್ತಮ ಮಳೆಯಾಗಿರುವುದರಿಂದ ಬಾವಿ, ಕುಂಟೆ, ಜೌಗು ಪ್ರದೇಶದಲ್ಲಿ ನೀರು ಜಿನುಗಲಾರಂಭಿಸಿದೆ.