ಉಡುಪಿ: ಕಡೆಗೋಲು ಕೃಷ್ಣನ ಊರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬುಧವಾರ ಸಂಭ್ರಮ, ಭಕ್ತಿ ಭಾವದಿಂದ ಆಚರಿಸಲಾಯಿತು. ಸಾವಿರಾರು ಭಕ್ತರು ಮಠಕ್ಕೆ ಬಂದು ದೇವರ ದರ್ಶನ ಪಡೆದರು. ಭಾರಿ ಸಂಖ್ಯೆಯಲ್ಲಿ ಜನರು ಬಂದಿದ್ದ ಪರಿಣಾಮ, ಸರದಿ ಸಾಲು ರಾಜಾಂಗಣದ ವರೆಗೂ ಇತ್ತು. ಹೂ ಮಾರಾಟಗಾರರು ರಥಬೀದಿಗೆ ಹೊಸ ಕಳೆ ತಂದಿದ್ದರು.