ಹೊನ್ನಾಳಿ ಪಟ್ಟಣ ಸಂಪರ್ಕಿಸುವ ತುಂಗಭದ್ರಾ ನದಿಗೆ ಹೊಸ ಸೇತುವೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಇದು ಲೋಕಾರ್ಪಣೆಯಾದ ಮೇಲೆ ಹಳೆಯ ಸೇತುವೆ ಏಕಮುಖವಾಗಿದೆ. ವಾಹನಗಳು ಸಂಚರಿಸಲು ಹಳೆಯ ಸೇತುವೆ ಈಗಲೂ ಯೋಗ್ಯವಾಗಿದೆ. ಆದರೆ ಹಳೆ ಸೇತುವೆಗೆ ಬರುವ ಮತ್ತು ಹೋಗುವ ಎರಡೂ ಕಡೆ ರಸ್ತೆ ತೀರಾ ಹದಗೆಟ್ಟಿದೆ.
ಈ ರಸ್ತೆ ಗುಂಡಿಗಳಲ್ಲಿ ಇತ್ತೀಚಿಗೆ ಸುರಿದ ಮಳೆಯ ನೀರು ನಿಂತ ಪರಿಣಾಮ ವಾಹನ ಸವಾರರಿಗೆ ಇಲ್ಲಿ ಸಂಚರಿಸುವುದೇ ತಲೆನೋವಾಗಿದೆ. ಹೊಸ ಸೇತುವೆ ಸಣ್ಣಪುಟ್ಟ ಕಾಮಗಾರಿ ಪೂರೈಸುವುದರ ಜೊತೆಗೆ ಹಳೆ ಸೇತುವೆಯ ಎರಡೂ ಕಡೆ ಹದಗೆಟ್ಟುಹೋಗಿರುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ದುರಸ್ತಿ ಮಾಡಬೇಕಾಗಿದೆ.