ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಗುರುವಾರ ಸಂಜೆ 3ರಿಂದ ಸುರಿಯಲಾರಂಭಿಸಿದ ಗುಡುಗು ಸಹಿತ ಮಳೆ 4ರ ನಂತರ ತೀವ್ರತೆ ಪಡೆಯಿತು.ಅರ್ಧ ಇಂಚು ಮಳೆಯಾಗಿದೆ.
ನಾಲ್ಕೈದು ದಿನಗಳಿಂದ ಬಿರುಬಿಸಿಲಿನಿಂದ ಜನತೆ ತತ್ತರಿಸುತ್ತಿದ್ದು ಸೆಕೆಯ ಧಗೆಯಿಂದ ಬೇಸತ್ತು ಮಳೆಗಾಗಿ ಹಂಬಲಿಸುತ್ತಿದ್ದರು. ಕಾದಿದ್ದ ಭೂಮಿ ಸುರಿದ ಮಳೆಗೆ ತಂಪಾಯಿತು.
ಗದ್ದೆಗಳಲ್ಲಿ ನೀರಾಗಿದ್ದು ರೈತರು ನೆಮ್ಮದಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕಾಫಿ ತೋಟಗಳಲ್ಲಿ ಗೊಬ್ಬರ ಹಾಕುವ ಕೆಲಸ ನಡೆದಿದ್ದು ಮಳೆಯ ಪ್ರಮಾಣ ಅಧಿಕವಾದರೆ ಗಿಡಗಳಿಗೆ ಕೊಳೆರೋಗ ತಗಲುವ ಸಂಭವವಿದೆ ಎನ್ನುತ್ತಾರೆ ಬೆಳೆಗಾರರು.