ಸೋಮವಾರಪೇಟೆ: ಇಲ್ಲಿಗೆ ಸಮೀಪದ ಐಗೂರು ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಭತ್ತದ ಕೃಷಿಕ ಕೆ.ಪಿ.ದಿನೇಶ್ರವರ ಸಹಯೋಗದಲ್ಲಿ ಭತ್ತದ ಕೃಷಿ ಭೂಮಿಯಲ್ಲಿ ಯಂತ್ರ ನಾಟಿಗೆ ಚಾಲನೆ ನೀಡಲಾಯಿತು.
ಕಾರ್ಮಿಕರ ಕೊರತೆ ಹಾಗೂ ಹೆಚ್ಚಿದ ಉತ್ಪದಾದನ ವೇಚ್ಚದಿಂದ ಹೆಚ್ಚಿನ ಕೃಷಿಕರು ಭತ್ತದ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಆದುದ್ದದರಿಂದ ಸರ್ಕಾರ ಯಂತ್ರ ನಾಟಿಗೆ ಉತ್ತೇಜನ ನೀಡುತ್ತಿದೆ ಎಂದು ಹೋಬಳಿ ಕೃಷಿ ಅಧಿಕಾರಿ ಕವಿತ ರೈತರಿಗೆ ಮಾಹಿತಿ ನೀಡಿದರು.
ಯಂತ್ರ ನಾಟಿಯಿಂದ ಭತ್ತದ ಉತ್ಪಾದನಾ ವೆಚ್ಛ ಕಡಿಮೆಯಾಗಲಿದೆ. ಭತ್ತದ ಸಸಿ ಮಡಿಯನ್ನು ಮನೆಯ ಕಣದಲ್ಲೇ ವೈಜ್ಞಾನಿಕವಾಗಿ ಮಾಡಿಕೊಳ್ಳಬಹುದು. ಸಸಿ ಮಡಿಗೆ 20 ದಿನ ಕಳೆದ ನಂತರ ನಾಟಿ ಮಾಡಬಹುದು. ಕೃಷಿ ಇಲಾಖೆಯಿಂದ ನಾಟಿಗೆ ಹೆಕ್ಟೇರ್ ಒಂದಕ್ಕೆ ರೂ. 4 ಸಾವಿರ ಸಹಾಯಧನ ನೀಡಲಾಗುತ್ತದೆ.
ಕೃಷಿಭಾಗ್ಯ ಯೋಜನೆಯಲ್ಲಿ ಕೆರೆ ನಿರ್ಮಿಸಲು ಸಹಾಯಧನ ನೀಡಲಾಗುತ್ತದೆ. ಕೃಷಿಕರು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಗ್ರಾಮದ ಪ್ರಗತಿಪರ ಕೃಷಿಕರಾದ ಕೆ.ಪಿ.ರಾಯ್, ಚಂದ್ರಪಾಲ್, ಗೋವಿಂದ, ರಾಜೇಶ್, ಜಯಕಾಂತ್, ಮೊಗಪ್ಪ, ಕೆ.ಪಿ.ಶೋಭ ಅವರುಗಳು ಮಾಹಿತಿ ಪಡೆದರು.