ಕಳೆದ ಕೆಲವು ದಿನಗಳ ಹಿಂದೆ ಹೆನ್ನಂಗಿ ಗ್ರಾಮದ ಗೋವಿಂದೇಗೌಡ ಎಂಬುವರ ಅಡಿಕೆ ತೋಟಕ್ಕೆ ದಾಳಿ ನಡೆಸಿದ ಆನೆಗಳ ಹಿಂಡು 350ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಮುರಿದುಹಾಕಿವೆ. ಇದೇ ಗ್ರಾಮದ ವ್ಯಾಪ್ತಿಯ ಜಗದೀಶ, ವಿಜಯ ಎಂಬುವರ ಅಡಿಕೆ ತೋಟಕ್ಕೂ ನುಗ್ಗಿ ಹಾನಿ ಮಾಡಿದ್ದು ರೈತರಿಗೆ ಲಕ್ಷಂತಾರೂಪಾಯಿ ನಷ್ಟವುಂಟಾಗಿದೆ.
ಅರಣ್ಯ ಇಲಾಖೆಯವರು ಆನೆಗಳ ದಾಳಿಯಿಂದ ಉಂಟಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸ ಬೇಕು ಹಾಗೂ ಆನೆಗಳ ಹಾವಳಿಯನ್ನು ತಪ್ಪಿಸ ಬೇಕೆಂದು ಕಟ್ಟೆಗೌಡರು ಆಗ್ರಹಿಸಿದ್ದಾರೆ.