ಜೈಲಿನೊಳಗಿರುವ ನನಗೆ, ಗೌರಿ ಲಂಕೇಶ್ ಹತ್ಯೆಯಾಗಿರುವ ವಿಚಾರ ಪತ್ರಿಕೆಗಳ ಮೂಲಕ ತಿಳಿದು ಬಹಳ ದುಃಖವಾಯಿತು. ಮಾನವಪ್ರೇಮಿಯೂ, ಪ್ರಜಾತಂತ್ರವಾದಿಯೂ ಆದ ಗೌರಿ, ನನ್ನ ಸ್ನೇಹಿತರೂ ಹೌದು. ಕರ್ನಾಟಕದಲ್ಲಿ 70ರ ದಶಕದಲ್ಲಿ ಲಂಕೇಶ್ ಅವರು ಆರಂಭಿಸಿದ ರಾಜಕೀಯ, ಸಾಮಾಜಿಕ ವಿಮರ್ಶಾತ್ಮಕ ಪತ್ರಿಕಾಸ್ತ್ರವನ್ನು ಗೌರಿ ಮುಂದುವರಿಸಿದ್ದರು. ಅವರು ಅನೇಕ ಚಿಂತಕರು ಹಾಗೂ ಪ್ರಗತಿಪರರನ್ನು ಸಾಹಿತ್ಯಲೋಕಕ್ಕೆ ನೀಡಿದರು.