ಮಸ್ಕಿ: ತುಮಕೂರಿನ ಸಿದ್ದಗಂಗಾ ಸ್ವಾಮೀಜಿ ವಿರುದ್ಧ ಹೇಳಿಕೆ ನೀಡಿರುವ ಬಸವ ಕೇಂದ್ರದ ಅಧ್ಯಕ್ಷೆ ಮಾತೆ ಮಹಾದೇವಿ ಅವರು ಕೂಡಲೇ ಕ್ಷಮೆ ಕೋರಬೇಕು ಎಂದು ವೀರಶೈವ ಮಹಾಸಭಾ ಮಸ್ಕಿ ಯುವ ಘಟಕದ ಅಧ್ಯಕ್ಷ ವೀರೇಶ ಪಾಟೀಲ ಆಗ್ರಹಿಸಿದ್ದಾರೆ.
‘ಮಹಾದೇವಿ ಅವರ ಹೇಳಿಕೆಯಿಂದ ಭಕ್ತರಿಗೆ ನೋವಾಗಿದೆ. ಸಿದ್ದಗಂಗಾ ಶ್ರೀ ಎಲ್ಲಾ ಪ್ರಶಸ್ತಿಯನ್ನು ಮೀರಿ ನಿಂತವರು. ಮಹಾದೇವಿ ಕ್ಷಮೆ ಕೇಳದಿದ್ದರೆ ವೀರಶೈವ ಮಹಾಸಭಾದ ಯುವ ವೇದಿಕೆ ಹೋರಾಟ ನಡೆಸಲಿದೆ’ ಎಂದು ಅವರು ತಿಳಿಸಿದ್ದಾರೆ.