ಕೊಚ್ಚಿ ಹೋದ ಕರು: ಮಲೆಮಹದೇಶ್ವರ ಬೆಟ್ಟ ತಪ್ಪಲಿನಲ್ಲಿ ಸುರಿದ ಭಾರಿ ಮಳೆಗೆ ಗುರುವಾರ ಸಂಜೆ ಹಳೇಯೂರು ಗ್ರಾಮದ ಬಳಿ ಕರುವೊಂದು ನೀರಿನಲ್ಲಿ ಕೊಚ್ಚಿ ಹೋಗಿದೆ.
ಜಾನುವಾರುಗಳನ್ನು ಮೇಯಿಸಲು ಕಾಡಿಗೆ ತೆರಳಿದ್ದ ಹಳೇಯೂರು ಗ್ರಾಮದ ರೈತ ಪುಟ್ಟಪ್ಪ ಸಂಜೆ ಮನೆಗೆ ಮರಳುವಾಗ ಚಿಕ್ಕ ಹಳ್ಳವೊಂದರಲ್ಲಿ ಏಕಾಏಕಿ ಭಾರಿ ಪ್ರಮಾಣದ ನೀರು ನುಗ್ಗಿದೆ. ನಾಲ್ಕು ಎಮ್ಮೆ ಮತ್ತು ಎರಡು ಹಸುಗಳು ಈಜಿ ದಡ ಸೇರಿವೆ. ಆದರೆ, ನೀರಿನ ರಭಸಕ್ಕೆ ಕರು ಕೊಚ್ಚಿಹೋಗಿದೆ.