ಮೈಸೂರು: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ದ್ವಿಚಕ್ರ ವಾಹನ ಚಾಲನೆ ಮಾಡುವ ಮೂಲಕ ಸುದರ್ಶನ್ ಜಾದೂಗಾರ್ ಅವರು ಸ್ವಚ್ಛ ಭಾರತದ ಕುರಿತು ನಗರ ದಲ್ಲಿ ಶುಕ್ರವಾರ ಅರಿವು ಮೂಡಿಸಿದರು. ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯಸ್ವಾಮಿ ದೇಗುಲದಿಂದ ಹೊರಟು, ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಹೈವೆ ವೃತ್ತ, ಬನ್ನಿಮಂಟಪದ ಮೂಲಕ ಸಿದ್ಧಲಿಂಗಪುರ ತಲುಪಿದರು.