ವಿಜಯಪುರ: ‘ವಿವಿಧ ಅಕಾಡೆಮಿ, ಪ್ರತಿಷ್ಠಾನಗಳು ತಮ್ಮ ಪ್ರಶಸ್ತಿಯನ್ನು ಪ್ರದಾನ ಮಾಡಲು ನನ್ನನ್ನೇ ಕರೆಯಲು ಆರಂಭಿಸಿದ ಮೇಲೆ ನಂಗ ಪ್ರಶಸ್ತಿ ಬರೋ ಕಾಲ ಮುಗ್ದೋಯ್ತು. ಇನ್ನೇನಿದ್ದರೂ ನಾನೇ ಕೊಡೋ ಕಾಲ ಬಂದಾಯ್ತು ಅಂದ್ಕೊಂಡು ಆಸೆಯನ್ನೇ ಬಿಟ್ಟಿದ್ದೆ. ಆದ್ರೇ ಇದೊಂಥರಾ ವಿಚಿತ್ರ. ಎರಡು ವರ್ಷಗಳ ಹಿಂದೆ ಹಲಸಂಗಿ ಗೆಳೆಯರ ಪ್ರತಿಷ್ಠಾನ ನೀಡುವ ಪ್ರಶಸ್ತಿ ಪ್ರದಾನ ಮಾಡಲು ವಿಜಯಪುರಕ್ಕೆ ಬಂದಿದ್ದೆ. ಇಂದು ಅದೇ ಪ್ರತಿಷ್ಠಾನದ ಪ್ರಶಸ್ತಿಗೆ ನಾನು ಭಾಜನನಾಗಿರುವೆ...’