ಹತ್ಯೆಯ ವಿಷಯದಲ್ಲಿ ಎಡಪಂಥೀಯ– ಬಲಪಂಥೀಯ ಎಂಬ ವಾಗ್ವಾದ, ಕಾಂಗ್ರೆಸ್– ಬಿಜೆಪಿ ತಿಕ್ಕಾಟಗಳು ಸರಿಯೇ? ಇದು ಸೂಕ್ತ ಸಮಯವೇ? ಇದನ್ನೆಲ್ಲಾ ಗಮನಿಸುತ್ತಿದ್ದರೆ, ಪೊಲೀಸರನ್ನು ಬಿಟ್ಟು ಉಳಿದೆಲ್ಲ ಸಂಘಟನೆಗಳೂ ‘ಇಂಥವರೇ ಹಂತಕರು’ ಎಂದು ಸ್ಪಷ್ಟ ನಿರ್ಧಾರಕ್ಕೆ ಬಂದಂತಿವೆ. ಇವರೆಲ್ಲರ ಮಾತು, ಹೇಳಿಕೆಗಳು ತನಿಖೆಯ ದಾರಿ ತಪ್ಪಿಸುತ್ತವೆ ಎಂಬುದನ್ನು ನಾವು ಮರೆಯಬಾರದು.