ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ 2014ರಲ್ಲಿ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ (ಐಬಿಪಿಎಸ್) ಮಾಡಿದ ತಿದ್ದುಪಡಿಯಿಂದ ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯ ಆಗುತ್ತಿದೆ. ಇದನ್ನು ಖಂಡಿಸಿ, ಪ್ರತಿಭಟಿಸಲು ಹೊರಟ ಅಭ್ಯರ್ಥಿಗಳ ಮೇಲೆ ಕರ್ನಾಟಕ ಪೋಲಿಸರೇ ಲಾಠಿ ಬೀಸಿದ್ದಾರೆ.