‘ಕೆಲ ವರ್ಷಗಳ ನಂತರ ಮಗನೇ ಸಹಪಾಠಿಗಳ ಜತೆ ಸೇರಿ ರಾಜಿ ಪಂಚಾಯಿತಿ ನೆಪದಲ್ಲಿ ಬಾಗೇಪಲ್ಲಿ ಪ್ರವಾಸಿ ಮಂದಿರಕ್ಕೆ ಕರೆಸಿ ಹಲ್ಲೆ ನಡೆಸಿದನು. ವೃದ್ಧಾಪ್ಯದಲ್ಲಿ ನನಗೆ ನ್ಯಾಯ ಒದಗಿಸಬೇಕು, ಮಗನಿಂದ ನನ್ನ ಹಣ, ಆಸ್ತಿಯನ್ನು ಕೊಡಿಸಿ ಕೊಡಬೇಕು ಎಂದು ಅಧಿಕಾರಿಗಳಿಂದ ಹಿಡಿದು ಮುಖ್ಯಮಂತ್ರಿ ವರೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಮಾರಪ್ಪರೆಡ್ಡಿ. ’ಈ ಎಲ್ಲ ಘಟನೆಗಳಿಂದ ವಿಚಲಿತನಾದೆ. ಹೀಗಾಗಿ ಬದುಕಿರುವಾಗಲೇ ನನ್ನ ವೈಕುಂಠ ಸಮಾರಾಧನೆಯನ್ನು ನಾನೇ ಮಾಡಿಕೊಳ್ಳುತ್ತಿದ್ದೇನೆ’ ಎಂದೂ ಹೇಳಿದರು.