ಚಿಕ್ಕಮಗಳೂರು: ತಾಲ್ಲೂಕಿನ ನರಗನಹಳ್ಳಿಯ ಯೋಧ ಎಂ.ಮಂಜುನಾಥ (44) ನಿಧನರಾಗಿದ್ದಾರ. ಅವರ ಅಂತ್ಯಕ್ರಿಯೆ ನಗರದ ಉಪ್ಪಳ್ಳಿಯ ಮುಕ್ತಿಧಾಮ ಚಿತಾಗಾರದಲ್ಲಿ ಭಾನುವಾರ ನಡೆಯಿತು.
ಬ್ರೇನ್ ಟ್ಯುಮರ್ ನಿಂದ ಬಳಲುತ್ತಿದ್ದ ಮಂಜುನಾಥ ಅವರು ಊಟಿಯ ಮಿಲಿಟರಿ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದರು. ಅವರಿಗೆ ಪತ್ನಿ ಸುಮಿತ್ರಾ. ಪುತ್ರ ತನ್ವಿತ್, ಪುತ್ರಿ ಪೂಜಾ ಇದ್ದಾರೆ.
ಮಂಜುನಾಥ ಅವರು 1993ರಲ್ಲಿ ಸುಬೇದಾರ್ ಆಗಿ ಸೇನೆಗೆ ಸೇರಿದ್ದರು. ಕಾಶ್ಮೀರ, ಪಂಜಾಬ್, ಅಸ್ಸಾಂ, ಸಿಕ್ಕಿಂ, ಸಿಯಾಚಿನ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಎರಡು ವರ್ಷಗಳಿಂದ ಬ್ರೇನ್ ಟ್ಯುಮರ್ ನಿಂದ ಅವರು ಬಳಲುತ್ತಿದ್ದರು. ಊಟಿಯ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.