ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣವಾಗಿ ತೊಡಗಲಿ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿರುವ ಹಲವು ಸಚಿವರು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ವೀರಶೈವ-ಲಿಂಗಾಯತ ವಿಚಾರದಲ್ಲಿ ತಮ್ಮ ಪ್ರಕಾಂಡ ಪಾಂಡಿತ್ಯವನ್ನು ತೋರಿಸುತ್ತಿದ್ದಾರೆ. ಇವರಲ್ಲಿ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ, ಈಶ್ವರ ಖಂಡ್ರೆ ಹಾಗೂ ಬಸವರಾಜ ರಾಯರಡ್ಡಿ ಪ್ರಮುಖರು.

ನಾಡಿನ ಹಿತ ಕಾಯುವುದಾಗಿ ಪ್ರಮಾಣ ವಚನ ಸ್ವೀಕರಿಸಿ ಮಂತ್ರಿಗಳಾದವರು, ಯಾವುದೇ ಭೇದ ಭಾವ ಮಾಡದೆ ನಾಡಿನ ಅಭಿವೃದ್ಧಿಗಾಗಿ ದುಡಿಯಬೇಕು. ಅದನ್ನು ಬಿಟ್ಟು ಸ್ವತಂತ್ರ ಧರ್ಮದ ಪ್ರತಿಪಾದನೆಯೇ ಇವರಿಗೆ ಫುಲ್ ಟೈಮ್‌ ಜಾಬ್ ಎಂಬಂತಾಗಿ ಹೋಗಿದೆ.

ಜನರ ಕೆಲಸಕ್ಕಿಂತ ಧರ್ಮದ ವಿಚಾರವೇ ಇವರಿಗೆ ಮುಖ್ಯವೆನಿಸಿದರೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧ್ಯುಕ್ತವಾಗಿ ಜಾತಿ– ಧರ್ಮದ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು.
-ಆರ್. ರಘು (ಕೌಟಿಲ್ಯ), ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT